ಉಂಡವಲ್ಲಿ ಗುಹೆಗಳು ಭಾರತದ ವಾಸ್ತು, ಶಿಲ್ಪಕಲೆ ಏಕಶಿಲೆಗೆ ಉದಾಹರಣೆ. ಪ್ರಾಚೀನ ವೀಕ್ಷಣಾ ವರ್ಗದ ಅತ್ಯುತ್ತಮವಾದ, ಪ್ರಶಂಸಾಪಾತ್ರವಾದ ಉಂಡವಲ್ಲಿ ಗುಹೆಗಳು ಭಾರತದ ರಾಜ್ಯ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಉಂಡವಲ್ಲಿಯಲ್ಲಿದೆ.ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಿಂದ ೨೨ ಕಿ.ಮೀ, ಉತ್ತರ ಪೂರ್ವದ ವಿಜಯವಾಡದಿಂದ ೬ ಕಿ.ಮೀ ದೂರ.ಇದು ರಾಷ್ಟ್ರೀಯ ಪ್ರಾಮುಖ್ಯತೆಯ ಕೇಂದ್ರ ಸಂರಕ್ಷಿತ ಸ್ಮಾರಕಗಳಲ್ಲಿ ಒಂದಾಗಿದೆ. == ಇತಿಹಾಸ == ಈ ಗುಹೆಗಳನ್ನು ೭ನೇ ಶತಮಾನದಿಂದ ಕಾಣಬಹುದಾಗಿದೆ.ಇವುಗಳು ಕ್ರಿಸ್ತಶಕ ೪೨೦-೬೨೦ ನ ವಿಷ್ಣುಕುಂಡಿ ರಾಜರೊಂದಿಗೆ ಸಂಬಂಧ ಹೊಂದಿದ್ದು,ಅನಂತಪದ್ಮನಾಭ ಮತ್ತು ನರಸಿಂಹ ಸ್ವಾಮಿಗೆ ಸಮರ್ಪಿಸಲಾಗಿದೆ.ಬೌದ್ಧ‍ ಸನ್ಯಾಸಿಗಳು ಇದನ್ನು ವಿಶ್ರಾಂತಿ ಗೃಹಗಳಾಗಿ ಬಳಸುತ್ತಾರೆ. == ಕಾಲಗಣನೆ == ಈ ಗುಹೆಗಳನ್ನು ೪ ರಿಂದ ೫ನೇ ಶತಮಾನದ ಕ್ರಿಸ್ತಶಕದಲ್ಲಿ ಬೆಟ್ಟದ ಮೇಲೆ ಘನ ಮರಳುಗಲ್ಲಿನಿಂದ ಕೆತ್ತಲಾಗಿದೆ.ಎರಡನೇ ಮಹಡಿಯಲ್ಲಿ ಅತಿದೊಡ್ಡ ಗ್ರನೈಟ್ ನಿಂದ ಕೆತ್ತಲ್ಪಟ್ಟ ಒಂದು ಒರಗಿದ ಭಂಗಿಯಲ್ಲಿ ವಿಷ್ಣುವಿನ ದೊಡ್ಡ ಪ್ರತಿಮೆಯೊಂದು ನಾಲ್ಕು ಕತೆಗಳನ್ನು ಹೊಂದಿದೆ.ಆಂಧ್ರದಲ್ಲಿ ಅನೇಕ ಬೌದ್ಧ ಕಲಾಕೃತಿಗಳು ಮತ್ತು ಸ್ತೂಪಗಳನ್ನು ಹಿಂದೂ ದೇವಾಲಯಗಳು ಮತ್ತು ದೇವತೆಗಳಾಗಿ ಮಾರ್ಪಡಿಸಲಾಗಿದೆ ಹಾಗೂ ಉಂಡವಲ್ಲಿ ಒಂದು ಉದಾಹರಣೆಯಾಗಿದೆ.ಇದು ಮೂಲತಃ ಉದಯಗಿರಿ ಮತ್ತು ಖಾಂಡ್ಗಿರಿಯ ವಾಸ್ತು ಶೈಲಿಯನ್ನು ಹೋಲುವ ಜೈನ ಗುಹೆಗಳು.ಮುಖ‍್ಯ ಗುಹೆಯು ಗುಪ್ತ ವಾಸ್ತುಶಿಲ್ಪದ ಆರಂಭಿಕ ಉದಾಹರಣೆಗಳಲ್ಲಿ ಒಂದಾಗಿದೆ.ಆರಂಭದಲ್ಲಿ ಗುಹೆಗಳನ್ನು ಜೈನ ವಾಸಸ್ಥಾನವಾಗಿ ಆಕಾರ ಮಾಡಲಾಯಿತು ಮತ್ತು ಮೊದಲ ಮಹಡಿ ಸ್ಥ‍ಳವು ಜೈನ ಶೈಲಿಯನ್ನು ಉಳಿಸಿಕೊಂಡಿವೆ;ವಿಹಾರವು ಜೈನ ಮೊನಾಸ್ಟಿಕ್ಸ್ ಅನ್ನು ಪ್ರದರ್ಶಿಸುತ್ತದೆ ಮತ್ತು ತೀರ್ಥಂಕರ ವಾಸ್ತುಶಿಲ್ಪಗಳನ್ನು ಒಳಗೊಂಡಿದೆ.ಗುಹೆಯ ಈ ಮೊದಲ ಹಂತವು ಕೆತ್ತಿದ ವಿಹಾರ ಮತ್ತು ಬೌದ್ಧ‍ ಕೆಲಸವನ್ನು ಒಳಗೊಂಡಿದೆ.ಗುಹೆಗಳ ಗೋಡೆಗಳು ನುರಿತ ಕುಶಲಕರ್ಮಿಗಳಿಂದ ಕೆತ್ತಿದ ಶಿಲ್ಪಗಳನ್ನು ಪ್ರದರ್ಶಿಸುತ್ತವೆ.ಗುಹೆಗಳು ಹಸಿರು ಗ್ರಾಮಾಂತರದಿಂದ ಸುತ್ತುವರಿದಿದೆ.ಕೃಷ್ಣ‍ ನದಿಯ ಗುಡ್ಡದ ಮೇಲಿರುವ ಎತ್ತರದ ಬೆಟ್ಟದಿಂದ ರಾಕ್ ಕಟ್ ವಾಸ್ತುಶಿಲ್ಪದ ಹಲವು ಉತ್ತಮ ಮಾದರಿಗಳನ್ನು ಕಾಣಬಹುದು. == ವಾಸ್ತುಶಿಲ್ಪ == ಇದು ೨೯ ಮೀಟರ್ ಉದ್ದ,೧೬ ಮೀಟರ್ ಅಗಲದ ಪೂರ್ವ ಮುಖದ ಮುಂಭಾಗವನ್ನು ಹೊಂದಿರುವ ಆಕರ್ಷಕ ನಾಲ್ಕು ಅಂತಸ್ತಿನ ಕಲ್ಲಿನ ದೇವಾಲಯವಾಗಿದೆ.ಪ್ರತಿ ಮಹಡಿಯ ಆಳದಲ್ಲಿ ವ್ಯತ್ಯಾಸವಿದೆ.ನೆಲ ಅಂತಸ್ತು ಒಂದು ಅಪೂರ್ಣ ವಾದ ಕಡಿಮೆ ಕಂಬದ ಸಭಾಂಗಣವಾಗಿದ್ದು,೮ ಸ್ತಂಭಗಳು ಮತ್ತು ೭ ಬಾಗಿಲು ತೆರೆಯುವ ಮುಂಭಾಗದಲ್ಲಿದೆ.ಮೊದಲ ಮಹಡಿಯು ಟ್ರಿಪಲ್ (ಶಿವ, ವಿ‍ಷ್ಣು ಮತ್ತು ಬ್ರಹ್ಮ) ಗೆ ಮೂಲತಃ ಸಮರ್ಪಿತವಾಗಿದೆ.ಮುಂಭಾಗದಲ್ಲಿ ಕಂಬದ ಹಾಲ್ನೊಂದಿಗೆ ಮೂರು ಪವಿತ್ರ ದೇವಾಲಯಗಳಿವೆ.ಗೋಡೆಗಳ ಮೇಲೆ ಶಿಲ್ಪಗಳು ವೈಷ್ಣವ ದೇವತೆಗಳನ್ನು ಪ್ರತಿನಿಧಿಸುತ್ತವೆ.ಎರಡನೇ ಮಹಡಿಯಲ್ಲಿ ಸರ್ಪದ ಮೇಲೆ ವಿಷ್ಣುವಿನ ಆಯತಾಕಾರದ ದೇವಾಲಯವಿದೆ.ಶಿವ ಮತ್ತು ವೈಷ್ಣವ ಶಿಲ್ಪಗಳು ಅಲ್ವಾರ್ಗಳಂತಹ ಶಿಲ್ಪಗಳನ್ನು ನಂತರದಲ್ಲಿ ಕೆತ್ತಲಾಗಿದೆ.ಮೇಲಿನ ಮಹಡಿ ಟ್ರಿಪಲ್ ದೇವಾಲಯದಿಂದ ಅಪೂರ್ಣ‍ಗೊಂಡಿತ್ತು. == ಸಾರಿಗೆ == ಗುಹೆಗಳ ಸಂಪರ್ಕದ ಏಕೈಕ ಮಾರ್ಗವೆಂದರೆ ಅದು ರಸ್ತೆಯ ಮೂಲಕ.ಈ ಸ್ಥಳಕ್ಕೆ ವಿಜಯವಾಡ,ಅಮರಾವತಿ,ಗುಂಟೂರಿನಿಂದ ಎಪಿಎಸ್ ಆರ್ಟಿಸಿ ಬಸ್ ಸೇವೆಯನ್ನು ನಿರ್ವಹಿಸಲಾಗಿದೆ. ಎಪಿಸಿಆರ್ಡಿಎ ಪ್ರಕಾಶಂ ಬ್ಯಾರೇಜ್ ನಿಂದ ಕೃಷ್ಣ ನದಿಯ ಮೂಲಕ ಪ್ರವಾಸಿ ಬಸ್-ಕಮ್-ಬೋಟ್ ಸೇವೆಗಳನ್ನು ನಡೆಸುತ್ತದೆ. == ಉಲ್ಲೇಖಗಳು ==